ಕನ್ನಡದಲ್ಲಿ 'ಆತ್ಮ ಕಥನಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಅದರೆ ಎಲ್ಲರೂ ಆತ್ಮಕತೆಯನ್ನು ಬರೆದಿರುವುದಿಲ್ಲ. ಎಲ್ಲರಿಗೂ ಅದನ್ನು ಬರೆಯಬೇಕೆಂಬ ಜರೂರಹ ಕೂಡಾ ಬಂದಿರುವುದಿಲ್ಲ. ತಾವಂದುಕೊಂಡ ಎಲ್ಲ ಪ್ರಕಾರದ ಬರವಣಿಗೆ ಮಾಡಿ ಮುಗಿಸಿದ ಮೇಲೆ ಆತ್ಮಕಥೆ ದಾಖಲಿಸಬೇಕೆಂಬಾಸೆಯಿಂದ ಬರೆಯುವುದು ಸಹಜವಾಗಿದೆ. ಹಾಗೆ ಬರೆದಿದ್ದು ಕೂಡಾ ಬೇರೊಂದು ಪ್ರಕಾರವಾಗುತ್ತದೆಂದು ಭಾವಿಸಬಹುದು. ಆದರೆ ಬಹಳನು ಆತಕತೆ ಬರವಣಿಗೆಗಳು ಸಮಾಜಕ್ಕೆ, ಓದುಗರಿಗೆ ಲೇಖಕರ ಬೇರೊಂದು ಆಯಾಮದ ಅನುಭವ ಕಥನ ಸಿಕ್ಕೀತೆಂಬ ಬಾವನೆ ಕೂಡಾ ಇರುತದೆಂದು ಅರಿಯಬಹುದಾಗಿದೆ . ವಾಸ್ತವ ಆತ್ಮಕಥನ 'ಪೂರ್ಣ ಸತ್ಯ'ದ ದಾಖಲೆಯಾಗಿರುವುದಿಲ್ಲ ಎಂಬುದನು ಗಂಭೀರವಾಗಿ ಯೋಚಿಸಬೇಕಾಗಿರುವ ಸಂದರ್ಭವಿದಾಗಿದೆ. ತನ್ನ ಆತ್ಮದ ಕಥನವನ್ನು ಹೇಳಿಕೊಳ್ಳುವುದೆಂದರೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳುವ ನೈಜ ಪ್ರಕ್ರಿಯೆಯಾಗಿರುತ್ತದೆ ಯಾವುದನ್ನೂ ಬಚ್ಚಿಡದೆ ಸತ್ಯ ಸಂಗತಿಗಳನ್ನು ದಾಖಲಿಸುವುದಕ್ಕೆ ಆತ್ಮಕಥನ'ವೆನ್ನಬಹುದು. ವಿಚಿತ್ರವೆಂದರೆ, ಪ್ರತಿಯೊಬ್ಬರ ಬದುಕಿನಲ್ಲೂ ಹೇಳಿಕೊಳ್ಳಲಾಗದ ಕೆಲವಾರು 'ಸಂಗತಿ'ಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುವ ಪತ್ನಿಗೋ, ಪತಿಗೋ ಹೇಳಿಕೊಳ್ಳದ ತನ್ನಲ್ಲಿ ಅಡಗಿಸಿಕೊಂಡಿರುವ ಅನೇಕ ಉದಾಹರಣೆಗಳಿರುವುದು ಸಹಜವಾಗಿರುತ್ತದೆ. ಅಂತಹದನ್ನು ಕೂಡಾ 'ಆತ್ಮಕಥನ'ದಲ್ಲಿ ದಾಖಲಿಸದೆ ಹೋಗಿರುವುದೂ ಉಂಟು. ಈ ಬಹಳ ಓದುಗರು ಆತ್ಮಕಥನ'ವೆಂದರೆ ಸತ್ಯದ ದಾಖಲೆ ಎಂದೇ ನಂಬಿಕೊಂಡಿದ ಸಾಮಾನ್ಯವಾಗಿ ಆತ್ಮಕತೆಯ ಮೂಲಕ ಬಚ್ಚಿಟ್ಟುಕೊಂಡಿರಬಹುದಾದ ಗುಟ್ಟುಗಳನ್ನು ಕೂಡಾ ಬಹಿರಂಗವಾಗಿ ಬರೆದುಕೊಂಡು ಓದುಗರ ದೃಷ್ಟಿಯಲ್ಲಿ 'ಸಣ್ಣದವನಾಗಲು ಮಾಡಿ ಇಷ್ಟಪಡಲಾರರು. ಕೆಲವರಿಗೆ ಮಾತ್ರ ಅದು ಸಾಧ್ಯವಾಗಬಹುದು. ಗಾಂಧೀಜಿಯವರು 'ಆತ್ಮಕಥೆ'ಯನ್ನು ಬರೆದುಕೊಂಡು ಆ ಮೂಲಕ ನಿಜವಾದ ಮಹಾತ್ಮರನಿಸಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಿ ಆಗಿಹೋದ ಪ್ರತಿಯೊಂದನ್ನೂ ಮುಕ್ತವಾಗಿ ಬರೆದುಕೊಂಡಿದ್ದು. ಮಹತ್ವದ ವಿಚಾರ. ಅದನ್ನು ವಿಶ್ವವೇ ಒಪ್ಪಿಕೊಂಡಿದೆ. ಆದರೂ ಆ ಸತ್ಯ ದಾಖಲೆಯನ ಹಿಡಿದುಕೊಂಡು 'ರಾಗದ್ವೇಷಿಗಳು' ಗಾಂಧೀಜಿಯನ್ನು ಟೀಕಿಸುವ ಅಸ್ತ್ರ ಮಾಡಿಕೊಳ್ಳುವ 'ಸಣ್ಣತನ'ವನ್ನೂ ಕಾಣಬಹುದಾಗಿದೆ. ಹಾಗಂತ 'ಸತ್ಯವನ್ನು ಬಚ್ಚಿಡದೆ ಬಿಚ್ಚಿಡುವುದು ಔಚಿತ್ಯಪೂರ್ಣ' ಅನ್ನಲೂಬಹುದು. ಆದರೆ ಎಲ್ಲರೂ ಗಾಂಧೀಜಿಯಾಗಲು ಸಾಧ್ಯವಾಗದು. ಅವರು ಆತ್ಮಕಥನ ಬರೆದ ಮೇಲೂ ಜೀವಂತವಾಗಿದ್ದರು. ಎಂದೆಂದಿಗೂ ಜೀವಂತವಾಗಿರಬಲ್ಲ ವ್ಯಕ್ತಿಯಾಗಿರುತ್ತಾರೆ. ಕೆಲವ ಸಾಧಕರು ತಮ್ಮ ಆತ್ಮಕಥನ ಬರೆಯುವ ಮೂಲಕ ಅಲ್ಲಿಗೇ ತಮ್ಮ ಸೃಜನಶೀಲತೆ-ಕಿಯಾಶೀಲತೆಗೆ ಮುಕ್ತಾಯ ಹಾಡಿಬಿಡುವುದುಂಟು. ಅದರೂ ಕೌಟುಂಬಿಕ ದೇವನ ಮುಂದುವರಿದಿರುತ್ತದೆ. ಕಥನದಲ್ಲಿ ದಾಖಲಿಸಿರುವ ಕೆಲವು 'ಸತ್ಯ'ಗಳಿಗೆ ಉತ್ತರದಾಯಿ ಆಗಿರುತ್ತಾರೆ ಅದು ಅವರ ಮುಂದಿನ ಬದುಕಿನಲ್ಲಿ ಸಮಸ್ಯೆ-ಸಂಕಷ್ಟ ತಂದಿಕ್ಕಬಹುದಾಗಿದೆ. ಅದಕ್ಕಾಗಿಯೇ ಎಲ್ಲ 'ಸತ್ಯ'ಗಳನ್ನೂ ಬರೆದುಕೊಳ್ಳಲು ಮುಂದಾಗುವುದಿಲ್ಲ. ಮುಂದುವರೆದಿದೆ........, ಅರ್ಥವಾಗದ ಲೋಕ ಜಾಣಗೆರೆ ಪತ್ರಿಕೆ ಪ್ರಕಾಶನ, #67, ಗಂಗಾಧರಪ್ಪ ಲೇಔಟ್, 5ನೇ ಕ್ರಾಸ್, ಪಾಪರೆಡ್ಡಿಪಾಳ್ಯ, ನಾಗರಬಾವಿ 2ನೇ ಹಂತ, -560072. Mob: 9343798078 Email: janagerev@gmail.com ಮೊದಲ ಮುದ್ರಣ :2026 ಪ್ರತಿಗಳು : 1000 ಪುಟಗಳು : xxiv +430-454 ಕಾಗದ ಬಳಕೆ: ಮ್ಯಾಪ್ಥೋ (80 ಜಿಎಸ್ಎಂ) ಮುಖಪುಟ ವಿನ್ಯಾಸ : ಅರುಣ್ ಕುಮಾರ್ ಹಕ್ಕುಗಳು: ಲೇಖಕರು Rs. 400-00
ಎಲ್ಲ ಸಂದೇಶಗಳು
ಮನದಾಳದ ಮಾತುಗಳು / ಜಾಣಗೆರೆ ವೆಂಕಟರಾಮಯ್ಯ
ಕನ್ನಡದಲ್ಲಿ 'ಆತ್ಮ ಕಥನಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಅದರೆ ಎಲ್ಲರೂ ಆತ್ಮಕತೆಯನ್ನು ಬರೆದಿರುವುದಿಲ್ಲ. ಎಲ್ಲರಿಗೂ ಅದನ್ನು ಬರೆಯಬೇಕೆಂಬ ಜರೂರಹ ಕೂಡಾ ಬಂದಿರುವುದಿಲ್ಲ. ತಾವಂದುಕೊಂಡ ಎಲ್ಲ ಪ್ರಕಾರದ ಬರವಣಿಗೆ ಮಾಡಿ ಮುಗಿಸಿದ ಮೇಲೆ ಆತ್ಮಕಥೆ ದಾಖಲಿಸಬೇಕೆಂಬಾಸೆಯಿಂದ ಬರೆಯುವುದು ಸಹಜವಾಗಿದೆ. ಹಾಗೆ ಬರೆದಿದ್ದು ಕೂಡಾ ಬೇರೊಂದು ಪ್ರಕಾರವಾಗುತ್ತದೆಂದು ಭಾವಿಸಬಹುದು. ಆದರೆ ಬಹಳನು ಆತಕತೆ ಬರವಣಿಗೆಗಳು ಸಮಾಜಕ್ಕೆ, ಓದುಗರಿಗೆ ಲೇಖಕರ ಬೇರೊಂದು ಆಯಾಮದ ಅನುಭವ ಕಥನ ಸಿಕ್ಕೀತೆಂಬ ಬಾವನೆ ಕೂಡಾ ಇರುತದೆಂದು ಅರಿಯಬಹುದಾಗಿದೆ . ವಾಸ್ತವ ಆತ್ಮಕಥನ 'ಪೂರ್ಣ ಸತ್ಯ'ದ ದಾಖಲೆಯಾಗಿರುವುದಿಲ್ಲ ಎಂಬುದನು ಗಂಭೀರವಾಗಿ ಯೋಚಿಸಬೇಕಾಗಿರುವ ಸಂದರ್ಭವಿದಾಗಿದೆ. ತನ್ನ ಆತ್ಮದ ಕಥನವನ್ನು ಹೇಳಿಕೊಳ್ಳುವುದೆಂದರೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳುವ ನೈಜ ಪ್ರಕ್ರಿಯೆಯಾಗಿರುತ್ತದೆ ಯಾವುದನ್ನೂ ಬಚ್ಚಿಡದೆ ಸತ್ಯ ಸಂಗತಿಗಳನ್ನು ದಾಖಲಿಸುವುದಕ್ಕೆ ಆತ್ಮಕಥನ'ವೆನ್ನಬಹುದು. ವಿಚಿತ್ರವೆಂದರೆ, ಪ್ರತಿಯೊಬ್ಬರ ಬದುಕಿನಲ್ಲೂ ಹೇಳಿಕೊಳ್ಳಲಾಗದ ಕೆಲವಾರು 'ಸಂಗತಿ'ಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುವ ಪತ್ನಿಗೋ, ಪತಿಗೋ ಹೇಳಿಕೊಳ್ಳದ ತನ್ನಲ್ಲಿ ಅಡಗಿಸಿಕೊಂಡಿರುವ ಅನೇಕ ಉದಾಹರಣೆಗಳಿರುವುದು ಸಹಜವಾಗಿರುತ್ತದೆ. ಅಂತಹದನ್ನು ಕೂಡಾ 'ಆತ್ಮಕಥನ'ದಲ್ಲಿ ದಾಖಲಿಸದೆ ಹೋಗಿರುವುದೂ ಉಂಟು. ಈ ಬಹಳ ಓದುಗರು ಆತ್ಮಕಥನ'ವೆಂದರೆ ಸತ್ಯದ ದಾಖಲೆ ಎಂದೇ ನಂಬಿಕೊಂಡಿದ ಸಾಮಾನ್ಯವಾಗಿ ಆತ್ಮಕತೆಯ ಮೂಲಕ ಬಚ್ಚಿಟ್ಟುಕೊಂಡಿರಬಹುದಾದ ಗುಟ್ಟುಗಳನ್ನು ಕೂಡಾ ಬಹಿರಂಗವಾಗಿ ಬರೆದುಕೊಂಡು ಓದುಗರ ದೃಷ್ಟಿಯಲ್ಲಿ 'ಸಣ್ಣದವನಾಗಲು ಮಾಡಿ ಇಷ್ಟಪಡಲಾರರು. ಕೆಲವರಿಗೆ ಮಾತ್ರ ಅದು ಸಾಧ್ಯವಾಗಬಹುದು. ಗಾಂಧೀಜಿಯವರು 'ಆತ್ಮಕಥೆ'ಯನ್ನು ಬರೆದುಕೊಂಡು ಆ ಮೂಲಕ ನಿಜವಾದ ಮಹಾತ್ಮರನಿಸಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಿ ಆಗಿಹೋದ ಪ್ರತಿಯೊಂದನ್ನೂ ಮುಕ್ತವಾಗಿ ಬರೆದುಕೊಂಡಿದ್ದು. ಮಹತ್ವದ ವಿಚಾರ. ಅದನ್ನು ವಿಶ್ವವೇ ಒಪ್ಪಿಕೊಂಡಿದೆ. ಆದರೂ ಆ ಸತ್ಯ ದಾಖಲೆಯನ ಹಿಡಿದುಕೊಂಡು 'ರಾಗದ್ವೇಷಿಗಳು' ಗಾಂಧೀಜಿಯನ್ನು ಟೀಕಿಸುವ ಅಸ್ತ್ರ ಮಾಡಿಕೊಳ್ಳುವ 'ಸಣ್ಣತನ'ವನ್ನೂ ಕಾಣಬಹುದಾಗಿದೆ. ಹಾಗಂತ 'ಸತ್ಯವನ್ನು ಬಚ್ಚಿಡದೆ ಬಿಚ್ಚಿಡುವುದು ಔಚಿತ್ಯಪೂರ್ಣ' ಅನ್ನಲೂಬಹುದು. ಆದರೆ ಎಲ್ಲರೂ ಗಾಂಧೀಜಿಯಾಗಲು ಸಾಧ್ಯವಾಗದು. ಅವರು ಆತ್ಮಕಥನ ಬರೆದ ಮೇಲೂ ಜೀವಂತವಾಗಿದ್ದರು. ಎಂದೆಂದಿಗೂ ಜೀವಂತವಾಗಿರಬಲ್ಲ ವ್ಯಕ್ತಿಯಾಗಿರುತ್ತಾರೆ. ಕೆಲವ ಸಾಧಕರು ತಮ್ಮ ಆತ್ಮಕಥನ ಬರೆಯುವ ಮೂಲಕ ಅಲ್ಲಿಗೇ ತಮ್ಮ ಸೃಜನಶೀಲತೆ-ಕಿಯಾಶೀಲತೆಗೆ ಮುಕ್ತಾಯ ಹಾಡಿಬಿಡುವುದುಂಟು. ಅದರೂ ಕೌಟುಂಬಿಕ ದೇವನ ಮುಂದುವರಿದಿರುತ್ತದೆ. ಕಥನದಲ್ಲಿ ದಾಖಲಿಸಿರುವ ಕೆಲವು 'ಸತ್ಯ'ಗಳಿಗೆ ಉತ್ತರದಾಯಿ ಆಗಿರುತ್ತಾರೆ ಅದು ಅವರ ಮುಂದಿನ ಬದುಕಿನಲ್ಲಿ ಸಮಸ್ಯೆ-ಸಂಕಷ್ಟ ತಂದಿಕ್ಕಬಹುದಾಗಿದೆ. ಅದಕ್ಕಾಗಿಯೇ ಎಲ್ಲ 'ಸತ್ಯ'ಗಳನ್ನೂ ಬರೆದುಕೊಳ್ಳಲು ಮುಂದಾಗುವುದಿಲ್ಲ. ಮುಂದುವರೆದಿದೆ........, ಅರ್ಥವಾಗದ ಲೋಕ ಜಾಣಗೆರೆ ಪತ್ರಿಕೆ ಪ್ರಕಾಶನ, #67, ಗಂಗಾಧರಪ್ಪ ಲೇಔಟ್, 5ನೇ ಕ್ರಾಸ್, ಪಾಪರೆಡ್ಡಿಪಾಳ್ಯ, ನಾಗರಬಾವಿ 2ನೇ ಹಂತ, -560072. Mob: 9343798078 Email: janagerev@gmail.com ಮೊದಲ ಮುದ್ರಣ :2026 ಪ್ರತಿಗಳು : 1000 ಪುಟಗಳು : xxiv +430-454 ಕಾಗದ ಬಳಕೆ: ಮ್ಯಾಪ್ಥೋ (80 ಜಿಎಸ್ಎಂ) ಮುಖಪುಟ ವಿನ್ಯಾಸ : ಅರುಣ್ ಕುಮಾರ್ ಹಕ್ಕುಗಳು: ಲೇಖಕರು Rs. 400-00
ಕನ್ನಡ ಚಳವಳಿ ಇತಿಹಾಸ : ಜಾಣಗೆರೆ ವೆಂಕಟರಾಮಯ್ಯ
ಚಳವಳಿಯಿಂದ ಗಟ್ಟಿ ಅನುಭವ...., ಕನ್ನಡ ಚಳವಳಿಯ ಇತಿಹಾಸವನ್ನು ಬರೆಯಬೇಕಾಗುತ್ತದೆಂಬ ಕಲ್ಪನೆಯೂ ನನಗಿರಲಿಲ್ಲ. ಒಂದು ಚಳವಳಿಯ ಇತಿಹಾಸ ಕುರಿತ ಬರವಣಿಗೆಯು ಸುಲಭದ್ದಲ್ಲ. ಅದರಲ್ಲೂ ಸಮಕಾಲೀನ ಚಳವಳಿ ಕುರಿತು ಬರೆಯುವುದು ಒಂದು ರೀತಿಯಲ್ಲಿ ದುಸಾಹಸದ ಕೆಲಸವಾಗುತದೆಂಬುದು ನನ್ನ ಭಾವನೆಯಾಗಿತ್ತು. ಆದರಿಂದಾಗಿ. ಆ ಬಗ್ಗೆ ಯೋಚಿಸಿಯೂ ಇರಲಿಲ್ಲ. ಅಂತಹ ಅವಕಾಶವೊಂದು ನನ್ನ ಪಾಲಿಗೆ ಬರುತ್ತದೆಂಬುದರ ಬಗ್ಗೆ ಕಲ್ಪನೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ, ಅರ್ಧ ಶತಮಾನ ತುಂಬಿರುವ ಕನ್ನಡ ಚಳವಳಿಯ ಇತಿಹಾಸ ಬರೆಯುವ ಕಾರ್ಯ ನನ್ನ ಹೆಗಲಿಗೆ ಬಿದ್ದಿತು. ತಕ್ಷಣ ಒಪ್ಪಿಗೆಯನ್ನೂ ಕೊಟ್ಟುಬಿಟ್ಟೆ.
ಛಾಯಾಚಿತ್ರ ಗ್ಯಾಲರಿ